ರಾಮನಿಲ್ಲದಿದ್ದರೆ ಮುತ್ತಿನ ಹಾರವೂ ಸಹ ಕವಡೆ ಬೆಲೆಯದ್ದು



ರಾಮನಿಲ್ಲದಿದ್ದರೆ ಮುತ್ತಿನ ಹಾರವೂ ಸಹ ಕವಡೆ ಬೆಲೆಯದ್ದು
ಒಂದು ಸಲ ಶ್ರೀರಾಮ ಮತ್ತು ಸೀತಾಮಾತೆಯನ್ನು ಭೇಟಿಯಾಗಲು ಹನುಮಂತನು ಬರುತ್ತಾನೆ ಮತ್ತು ಅವರಿಗೆ ಮನಸಾರೆ ನಮಸ್ಕಾರವನ್ನು ಮಾಡುತ್ತಾರೆ. ಆಗ ಸೀತಾದೇವಿಗೆ ಅನಿಸುತ್ತದೆ, ಹನುಮಂತನು ನನ್ನ ಸ್ವಾಮಿಯ ಭಕ್ತನಿದ್ದಾನೆ. ಅವನು ಯಾವಾಗಲೂ ಸೇವೆ ಮಾಡುತ್ತಿರುತ್ತಾನೆ, ಅವನಿಗೆ ಏನಾದರೂ ನೀಡಬೇಕು. ಹೀಗೆ ಅನಿಸಿದ ತಕ್ಷಣ ಸೀತಾದೇವಿಯು ತನ್ನ ಕೊರಳಿನಲ್ಲಿರುವ ಮುತ್ತಿನ ಹಾರವನ್ನು ಹನುಮಂತನಿಗೆ ನೀಡುತ್ತಾಳೆ ಮತ್ತು ನಾನು ಪ್ರಸನ್ನಳಾಗಿದ್ದೇನೆ ಎಂದು ಹೇಳುತ್ತಾಳೆ.

ಮಾಲೆಯನ್ನು ಪಡೆದ ಹನುಮಂತನು ಮುಂದೆ ಹೋಗಿ ಕೂತು ಪ್ರತಿಯೊಂದು ಮಣಿಯನ್ನು ದಾರದಿಂದ ತೆಗೆದು ನೋಡಿ ನೋಡಿ ಒಡೆಯುತ್ತಾನೆ. ಈ ರೀತಿ ಎಲ್ಲಾ ಮಣಿಗಳನ್ನು ಒಡೆದು ಹಾಕುತ್ತಾನೆ. ಇದನ್ನು ನೋಡಿದ ಸೀತಾದೇವಿಯು ಸಿಟ್ಟಿನಿಂದ ಕೇಳಿದಳು, "ನಾನು ಪ್ರೀತಿಯಿಂದ ನೀಡಿದ ಹಾರವನ್ನು ಯಾಕೆ ಹೀಗೆ ಮಾಡಿದೆ?"

ಹನುಮಂತನು ಹೇಳಿದನು, "ಈ ಮಾಲೆಯ ಯಾವ ಮಣಿಯಲ್ಲಿ ನನಗೆ ರಾಮನು ಕಾಣುತ್ತಾನೆಂದು ನೋಡುತ್ತಿದ್ದೆ. ಯಾವ ಮಣಿಯಲ್ಲಿ ರಾಮನು ಕಾಣಲಿಲ್ಲವೊ ಅದನ್ನು ನಾನು ಒಡೆದುಹಾಕಿದೆ". ಇದನ್ನು ಕೇಳಿದ ಸೀತಾಮಾತೆಗೆ ತಿಳಿಯಿತು, ಹಾರವನ್ನು ನಾನು ಕೊಡುತ್ತಿದ್ದೇನೆಂಬ ಭಾವದಲ್ಲಿ ಅವಳು ಹಾರವನ್ನು ನೀಡುವಾಗ ರಾಮನ ಸ್ಮರಣೆ ಮಾಡಿರಲಿಲ್ಲ. ಎಲ್ಲವನ್ನೂ ಶ್ರೀರಾಮನೇ ಮಾಡುವುದು.

ಸೀತಾದೇವಿಯು ಹನುಮಂತನ ಕ್ಷಮೆ ಕೇಳುತ್ತಾಳೆ ಮತ್ತು ಶ್ರೀರಾಮನ ಸ್ಮರಣೆ ಮಾಡುತ್ತಾ ಮತ್ತೊಂದು ಹಾರವನ್ನು ನೀಡುತ್ತಾಳೆ. ಅದನ್ನು ತಕ್ಷಣ ಹನುಮಂತನು ತನ್ನ ಕೊರಳಿಗೆ ಹಾಕಿಕೊಳ್ಳುತ್ತಾನೆ. ಮಕ್ಕಳೇ, ಯಾವುದು ದೇವರ ಸ್ಮರಣೆ ಮಾಡಿಕೊಡುತ್ತದೆಯೊ ಅದು ಹನುಮಂತನಿಗೆ ಪ್ರಿಯವಾಗುತ್ತದೆ.
 
*****************ಕೃಪೆ: ಆಸೆ ಬ್ಲಾಗ್*****************

ಸಂದೀಪನ ಗುರುಭಕ್ತಿ

ಸಂದೀಪನ ಗುರುಭಕ್ತಿ
ಹಿಂದೆ ಸಂದೀಪ ಎನ್ನುವವನು ವಿದ್ಯಾರ್ಜನೆಗಾಗಿ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿದ್ದ. ಹೀಗಿರಲು ಒಮ್ಮೆ ಗುರುಗಳಿಗೆ ತಮ್ಮ ಶಿಷ್ಯರನ್ನು ಪರೀಕ್ಷಿಸಬೇಕೆಂಬ ಮನಸ್ಸಾಯಿತು.ಅವರು ತಮ್ಮ ಶಿಷ್ಯಂದಿರನ್ನು ಬಳಿಗೆ ಕರೆದು "ನನಗೆ ಕಾಶಿಗೆ ಹೋಗಬೇಕೆಂಬ ಮನಸ್ಸಾಗಿದೆ.ನನಗೆ ಖಾಯಿಲೆಯೂ ಕಾಡುತ್ತಿದೆ."ಎಂದರು.ಆಗ ಅವರ ಶಿಷ್ಯರೆಲ್ಲರೂ ಎಲ್ಲಿ ತಮ್ಮನ್ನು ಗುರುಗಳ ಜೊತೆಗೆ ಬರಲು ತಿಳಿಸುತ್ತಾರೋ ಎಂದು ಹೆದರಿದರು.ಅವರಾರಿಗೂ ಗುರುಗಳ ಸೇವೆ ಮಾಡಿಕೊಂಡಿರಲು ಇಷ್ಟವಿರಲಿಲ್ಲ.
ಆದರೆ ಸಂದೀಪ ಮಾತ್ರ ಗುರುಗಳ ಜೊತೆ ಕಾಶಿಗೆ ಹೋಗಲು ಸಿದ್ಧನಾದ.ಕಾಶಿಯಲ್ಲಿ ಗುರುಗಳ ಸೇವೆಯನ್ನು ಮಾಡುತ್ತಿದ್ದ.ಭಿಕ್ಷಾಟನೆಗೆ ಹೋಗಿ ಆಹಾರವನ್ನು ತರುತ್ತಿದ್ದ.ಮತ್ತು ಗುರುಗಳ ಗಾಯಗಳಿಗೆ ಮದ್ದು ಹಚ್ಚಿ ಆರೈಕೆ ಮಾಡುತ್ತಿದ್ದ.ಗುರುಗಳು ಎಷ್ಟೇ ಸಿಟ್ಟು ಮಾಡಿಕೊಂಡರೂ ಬೇಸರ ಮಾಡಿಕೊಳ್ಳದೆ ಅವರ ಆರೈಕೆ ಮಾಡುತ್ತಿದ್ದ.
ಅವನ ಗುರುಸೇವೆಯಿಂದ ಸಾಕ್ಷಾತ್ ಪರಶಿವನೇ ಸಂತುಷ್ಟನಾಗಿ ವರವನ್ನು ನೀಡಲು ಬಂದನು.ಆಗ ಸಂದೀಪನು ವಿನೀತನಾಗಿ ತಾನು ಗುರುಗಳ ಬಳಿ ಕೇಳಿ ಹೇಳುವುದಾಗಿ ತಿಳಿಸಿದ.ಆದರೆ ವಿಷಯ ತಿಳಿದ ಗುರುಗಳು ಸಂದೀಪನನ್ನೇ ಮೂದಲಿಸಿ ಸುಳ್ಳು ಹೇಳಿದಕ್ಕಾಗಿ ಹೊಡೆದು ಅಟ್ಟಿದರು.ಆದರೆ ಸಂದೀಪ ಪರಶಿವನ ಬಳಿ ಬಂದು ತನ್ನ ಗುರುಗಳ ಖಾಯಿಲೆ ವಾಸಿಯಾಗುವಂತೆ ಅನುಗ್ರಹಿಸಲು ಬೇಡಿಕೊಂಡ.ಆದರೆ ನಡೆದಿದ್ದನ್ನು ಮೊದಲೇ ಅರಿತ್ತಿದ್ದ ಪರಶಿವನು ಸಂದೀಪನ ನಿಷ್ಕಲ್ಮಶ ಗುರುಭಕ್ತಿಗೆ ಮೆಚ್ಚಿ ಅವನು ಕೇಳಿದ ವರವನ್ನೂ ಮತ್ತು ಆತನಿಗೆ ಸಕಲ ಸಂಪತ್ತನ್ನೂ ನೀಡಿದ.
ನೀತಿ:ಗುರುಭಕ್ತಿಯು ದೇವಭಕ್ತಿಗೆ ಸಮನಾದದ್ದು.
 
 *****************ಕೃಪೆ: ಆಸೆ ಬ್ಲಾಗ್*****************

ಮಹಿಷಾಸುರ ಮರ್ದಿನಿ ದುರ್ಗಾದೇವಿ

ಮಹಿಷಾಸುರ ಮರ್ದಿನಿ ದುರ್ಗಾದೇವಿ
ನವರಾತ್ರಿಯ ಮೊದಲನೆ ದಿನ ದುರ್ಗಾದೇವಿ ಅಥವಾ ಮಹಾಕಾಳಿಯ ಪ್ರತಿಷ್ಠಾಪನೆಯನ್ನು ಮಾಡುತ್ತಾರೆ ಮತ್ತು ಒಂಬತ್ತು ದಿವಸ ದೇವಿಯ ಉತ್ಸವವನ್ನು ಆಚರಿಸಲಾಗುತ್ತದೆ. ನಾವು ಇಂದು ದುರ್ಗಾದೇವಿಯು ಮಹಿಷಾಸುರ ಮರ್ದಿನಿ ಹೇಗೆ ಆದಳು ಎಂಬುದನ್ನು ತಿಳಿಯೋಣ.

ಹಿಂದೆ ಮಹಿಷಾಸುರ ಎಂಬ ರಾಕ್ಷಸನಿದ್ದ. ಅವನು ಜನರಿಗೆ ತುಂಬಾ ತೊಂದರೆ ನೀಡುತ್ತಿದ್ದನು. ಒಂದು ಸಲ ಅವನು ಇಂದ್ರನೊಂದಿಗೆ ಯುದ್ಧವನ್ನು ಮಾಡಿದನು ಮತ್ತು ಇಂದ್ರನನ್ನು ಸೋಲಿಸಿ ಅವನ ಸ್ಥಾನವನ್ನು ಪಡೆದನು. ಇಂದ್ರನನ್ನು ಸೋಲಿಸಿದಕ್ಕಾಗಿ ಅವನಿಗೆ ತನ್ನ ಶಕ್ತಿಯ ಬಗ್ಗೆ ತುಂಬಾ ಗರ್ವವಾಯಿತು. ಅವನು ಎಲ್ಲರೊಂದಿಗೆ ಕೆಟ್ಟದಾಗಿ ಮಾತನಾಡುತ್ತಿದ್ದನು. ದಿನೇ ದಿನೇ ಹೆಚ್ಚಾಗುತ್ತಿರುವ ಅವನ ಅನ್ಯಾಯವನ್ನು ಸಹಿಸಲಾರದೇ ದೇವತೆಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನಿಗೆ ಪ್ರಾರ್ಥನೆಯನ್ನು ಮಾಡಿದರು ಮತ್ತು ಅವನಿಂದ ರಕ್ಷಣೆಯನ್ನು ನೀಡಬೇಕೆಂದು ಪ್ರಾರ್ಥಿಸಿದರು.

ದೇವರು ಒಂದು ಕಡೆ ಸೇರಿ ತಮ್ಮ ತಮ್ಮ ಶಕ್ತಿಯನ್ನು ಸೇರಿಸಿ ದೇವಿಯೊಬ್ಬಳನ್ನು ನಿರ್ಮಾಣ ಮಾಡಿದರು. ಶಂಕರನ ಶಕ್ತಿಯಿಂದ ಮುಖ, ವಿಷ್ಣುವಿನ ಶಕ್ತಿಯಿಂದ ಕೈಗಳು ಮತ್ತು ಅಗ್ನಿಯ ಶಕ್ತಿಯಿಂದ ಮೂರು ಕಣ್ಣುಗಳು ನಿರ್ಮಾಣವಾದವು. ಈ ರೀತಿ ಪ್ರತಿಯೊಬ್ಬ ದೇವರು ಒಂದುಂದು ಅಂಗವನ್ನು ನೀಡಿ ಸಾಕ್ಷಾತ್ ದೇವಿಯ ನಿರ್ಮಾಣವಾಯಿತು. ಶಿವನು ತನ್ನ ತ್ರಿಶೂಲವನ್ನು, ವಿಷ್ಣು ಚಕ್ರವನ್ನು, ಇಂದ್ರನು ವಜ್ರವನ್ನು ಈ ರೀತಿ ಎಲ್ಲ ದೇವರು ದೇವಿಗೆ ಆಯುಧಗಳನ್ನು ನೀಡಿದರು.

ದೇವರ ತೇಜದಿಂದ ನಿರ್ಮಾಣವಾದ ದೇವಿಯು ಮಹಿಷಾಸುರನನ್ನು ವಧಿಸಲು ರೌದ್ರರೂಪವನ್ನು ತಾಳಿದರು. ಮಹಿಷಾಸುರ ಮತ್ತು ದೇವಿಗೆ ಒಂಬತ್ತು ದಿನಗಳ ಘೋರ ಯುದ್ಧವಾಯಿತು. ದುರ್ಗಾದೇವಿಯು ತನ್ನ ತ್ರಿಶೂಲದಿಂದ ಮಹಿಷಾಸುರನ್ನು ವಧಿಸಿದರು. ಮಹಿಷಾಸುರನನ್ನು ವಧಿಸಿದರಿಂದ ದೇವಿಗೆ ಮಹಿಷಾಸುರಮರ್ದಿನಿ ಎಂದು ಹೆಸರು ಬಂದಿತು. ಇದರ ನೆನಪಿಗಾಗಿ ನಾವು ನವರಾತ್ರಿಯನ್ನು ಆಚರಿಸುತ್ತೇವೆ. 
 
 *****************ಕೃಪೆ: ಬಾಲಸಂಸ್ಕಾರ*****************

ಹಾವುಗಳಿಗೇಕೆ ಎರಡು ನಾಲಿಗೆ?

ಹಾವುಗಳಿಗೇಕೆ ಎರಡು ನಾಲಿಗೆ?
ಬಹಳ ಹಿಂದೆ ಕಶ್ಯಪ ಮುನಿಗಳಿಗೆ ಇಬ್ಬರು ಹೆಂಡತಿಯರಿದ್ದರು.ಅವರೇ ಕದ್ರು ಮತ್ತು ವಿನುತ.ಇವರಲ್ಲಿ ಕದ್ರುವಿಗೆ ಸರ್ಪಗಳು(ಹಾವುಗಳು) ಮಕ್ಕಳು.ವಿನುತಗೆ ಅರುಣ ಮತ್ತು ಗರುಡ ಎಂಬ ಇಬ್ಬರು ಮಕ್ಕಳು. ಹೀಗಿರಲು ಒಂದು ದಿನಾ ಅವರೀರ್ವರೂ ಸಮುದ್ರ ಮಂಥನದಲ್ಲಿ ಬಿಳಿಗುದುರೆ ಹುಟ್ಟುವುದನ್ನು ಕಾಣುತ್ತಾರೆ.ಆಗ ಅವರೀರ್ವರಲ್ಲೂ ಒಂದು ಪಂಥ ಏರ್ಪಡುತ್ತದೆ.ಅದೇನೆಂದರೆ ವಿನುತ ಆ ಕುದುರೆ ಪೂರ್ತಿ ಬಿಳಿಯಾಗಿದೆ ಎನ್ನುತ್ತಾಳೆ.ಆದರೆ ಕದ್ರು ಅದರ ಬಾಲ ಮಾತ್ರ ಕಪ್ಪಗಾಗಿದೆ ಎನ್ನುತ್ತಾಳೆ.ಪಂಥದಲ್ಲಿ ಸೋತವರು ಗೆದ್ದವರ ದಾಸಿಯಾಗಬೇಕು ಎಂದು ನಿರ್ಣಯವಾಗುತ್ತದೆ.
ಆದರೆ ಕದ್ರು ಪಂಥದಲ್ಲಿ ತಾನೇ ಗೆಲ್ಲಬೇಕು ಎಂದು ತನ್ನ ಮಕ್ಕಳಾದ ಹಾವುಗಳನ್ನು ಕರೆದು ಕುದುರೆಯ ಬಾಲದಲ್ಲಿ ಸೇರಿಕೊಳ್ಳುವಂತೆ ಸೂಚಿಸುತ್ತಾಳೆ.ಈಗ ಕುದುರೆಯ ಬಾಲ ಕಪ್ಪಗೆ ಕಾಣುತ್ತಿದೆ ಮತ್ತು ವಿನುತ ಕದ್ರುವಿನ ದಾಸಿಯಾಗುತ್ತಾಳೆ.ಆದರೆ ಕದ್ರು ವಿನುತಳನ್ನು ಅತ್ಯಂತ ಹೀನಾಯವಾಗಿ ನದೆಸಿಕೊಳ್ಳುತ್ತಾಳೆ.ಇದರಿಂದ ಗರುಡನಿಗೆ ಬೇಸರವಾಗುತ್ತದೆ.ಮತ್ತು ಆತ ಸರ್ಪಗಳ ಬಳಿ ಬಂದು ತನ್ನ ತಾಯಿಯ ಬಂಧ ಮುಕ್ತಿಯ ಬಗ್ಗೆ ಮಾತಾಡುತ್ತಾನೆ.
ಆಗ ಸರ್ಪಗಳು ತಮಗೆ ಸ್ವರ್ಗದಿಂದ ಅಮೃತ ತಂದು ಕೊಟ್ಟರೆ ಬಂಧ ಮುಕ್ತಿ ಮಾಡುವುದಾಗಿ ತಿಳಿಸುತ್ತವೆ.ಅಂತೆಯೇ ಗರುಡ ಸ್ವರ್ಗಕ್ಕೆ ಹೋಗಿ ಇಂದ್ರನ ಭೇಟಿ ಮಾಡುತ್ತಾನೆ.ಆದರೆ ಇಂದ್ರ ಅಮೃತ ನೀಡಲು ಹಿಂಜರಿಯುತ್ತಾನೆ.ಆಗ ಗರುಡ ತನ್ನ ತಾಯಿಯ ಬಂಧ ಮುಕ್ತಿಯಾದ ಕೂಡಲೇ ಅಮೃತ ವಾಪಸ್ ತರುವುದಾಗಿ ತಿಳಿಸುತ್ತಾನೆ.ಮತ್ತು ಇಂದ್ರ ಒಪ್ಪಿ ಅಮೃತ ನೀಡುತ್ತಾನೆ.
ಅಮೃತವನ್ನು ಕಂಡ ಸರ್ಪಗಳು ಸಂತೋಷಗೊಂಡು ವಿನುತಾಳನ್ನು ಬಂಧ ಮುಕ್ತಿಗೊಳಿಸುತ್ತವೆ ಆದರೆ ತಕ್ಷಣ ಗರುಡ ಅಮೃತವನ್ನು ಅಲ್ಲಿಂದ ಕೊಂಡೊಯುತ್ತಾನೆ.ಸರ್ಪಗಳು ನಿರಾಸೆಯಿಂದ ಆ ಅಮೃತ ಇಟ್ಟಿದ್ದ ಧರ್ಬೆಯನ್ನೇ ನೆಕ್ಕುತ್ತವೆ.ಆಗ ನೆಕ್ಕಿ ನೆಕ್ಕಿ ಅವುಗಳ ನಾಲಿಗೆ ಎರಡಾಗಿ ಸೀಳಿ ಹೋಗುತ್ತದೆ.ಆಮೇಲಿಂದ ಗರುಡನಿಗೂ,ಸರ್ಪಗಳಿಗೂ ವೈರತ್ವ ಉಂಟಾಗುತ್ತದೆ ಮತ್ತು ಸರ್ಪಗಳ ನಾಲಿಗೆ ಎರಡಾಗಿ ಸೀಳಿ ಹೋಗಿದೆ.
 *****************ಕೃಪೆ: ಆಸೆ ಬ್ಲಾಗ್*****************

ಸುದಾಮನ ಕಥೆ

ಸುದಾಮನ ಕಥೆ
ಸುದಾಮನು ಒಬ್ಬ ಬಡ ಬ್ರಾಹ್ಮಣನಾಗಿದ್ದನು. ಭಗವಂತನಾದ ಶ್ರೀಕೃಷ್ಣನು ಸುದಾಮನ ಸ್ನೇಹಿತನಾಗಿದ್ದನು. ಸುದಾಮನ ಹೆಂಡತಿಯು ಸುದಾಮನಿಗೆ ಯಾವಾಗಲೂ ನೀವು ಶ್ರೀಕೃಷ್ಣ ನಿಮ್ಮ ಸ್ನೇಹಿತನೆಂದು ಹೇಳುತ್ತಿರುತ್ತೀರಿ, ನೀವು ಯಾಕೆ ಅವನಲ್ಲಿ ನಮ್ಮ ಬಡತನವನ್ನು ಹೋಗಲಾಡಿಸು ಎಂದು ಹೇಳಬಾರದು? ಹೇಗಿದ್ದರು ಶ್ರೀಕೃಷ್ಣನು ಒಬ್ಬ ರಾಜನಾಗಿದ್ದಾನೆ. ಶ್ರೀಕೃಷ್ಣ ನಿಮಗೆ ಕೆಲವು ಸಹಸ್ರ ಬಂಗಾರದ ವರಹಗಳನ್ನು ನೀಡಿದರೆ, ಅವನ ಖಜಾನೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ", ಎಂದು ಹೇಳುತ್ತಿದ್ದಳು. ಆದರೆ ಸುದಾಮನು ಇದಕ್ಕೆ ಒಪ್ಪುತ್ತಿರಲಿಲ್ಲ.
ಒಂದು ದಿನ ಸುದಾಮನು ಹೆಂಡತಿಯ ಒತ್ತಾಯದ ಮೇರೆಗೆ ಶ್ರೀಕೃಷ್ಣನಲ್ಲಿ ತನ್ನ ಬಡತನದ ಬಗ್ಗೆ ಹೇಳಿ, ಧನ ಸಹಾಯ ಪಡೆಯಲು ಅರಮನೆಗೆ ಹೊರಟನು. ಸುದಾಮನು ಶ್ರೀಕೃಷ್ಣನ ಅರಮನೆಗೆ ಬಂದಾಗ, ಅಲ್ಲಿದ್ದ ದ್ವಾರಪಾಲಕರು ಅವನನ್ನು ಅರಮನೆಯ ಒಳಗೆ ಬಿಡಲು ಮೊದಲು ಒಪ್ಪಲಿಲ್ಲ ನಂತರ ಅವನನ್ನು ಅರಮನೆಯ ಒಳಗೆ ಹೊಗಲು ಬಿಟ್ಟರು.
ಶ್ರೀಕೃಷ್ಣನು ಸುದಾಮನು ತನ್ನ ಅರಮನೆಗೆ ಬಂದ ವಿಷಯವನ್ನು ಕೇಳಿ ತುಂಬ ಸಂತೋಷದಿಂದ ಅವನನ್ನು ತುಂಬ ಪ್ರೀತಿ, ಆದರದಿಂದ ಅರಮನೆಗೆ ಬರಮಾಡಿಕೊಂಡನು ಮತ್ತು ಅವನಿಗೆ ಆದರ ಆತಿಥ್ಯವನ್ನು ಮಾಡಿ ಸತ್ಕರಿಸಿದನು. ಆದರೆ ಸುದಾಮನು ಶ್ರೀಕೃಷ್ಣನ ಭಕ್ತನಾದ್ದರಿಂದ ತಾನು ಅರಮನೆಗೆ ಏಕೆ ಬಂದೆ ಎಂಬ ವಿಷಯವನ್ನು ಶ್ರೀಕೃಷ್ಣನಿಗೆ ತಿಳಿಸಲು ಆಗಲಿಲ್ಲ. ಸುದಾಮನು ಹೊರಡುವಾಗ ಶ್ರೀಕೃಷ್ಣನು ಏನಾದರೂ ವಿಷಯವಿತ್ತೇ ಎಂದು ಕೇಳಲು ಸುದಾಮನು ಏನು ಇಲ್ಲ ಎಂದು ಹೇಳಿದನು.
ಸುದಾಮನು ತನ್ನ ಹಳ್ಳಿಯ ಕಡೆಗೆ ಬರಿಗೈಯಲ್ಲಿ ತುಂಬ ಹೆದರಿಕೆಯಿಂದ ಹೊರಟನು ಯಾಕೆಂದರೆ ಹೆಂಡತಿಯು ಅವನಿಗೆ ಬರಿಗೈಯಲ್ಲಿ ಬರಬಾರದೆಂದು ಹೇಳಿದ್ದಳು. ಆದರೆ ಸುದಾಮನು ತನ್ನ ಹಳ್ಳಿಯನ್ನು ಪ್ರವೇಶಮಾಡಿದಾಗ ಅವನಿಗೆ ಆಶ್ಚರ್ಯಕಾದಿತ್ತು. ಶ್ರೀಕೃಷ್ಣನು ಅವನ ಮನೆಯನ್ನು ಸುಂದರವಾದ ಅರಮನೆಯನ್ನಾಗಿ ಪರಿವರ್ತಿಸಿದ್ದನು ಮತ್ತು ಆತನಿಗೆ ಸಾಕಷ್ಟು ಧನವನ್ನು ಅನುಗ್ರಹಿಸಿದ್ದನು 

*****************ಕೃಪೆ: ಬಾಲಸಂಸ್ಕಾರ*****************