ಆಡಿಯ ಕಥೆ

ಆಡಿಯ ಕಥೆ
ಹಿಂದೆ ಅಂಧಕಾಸುರ ಎನ್ನುವ ರಾಕ್ಷಸನನ್ನು ಆತನ ಪಾಪ ಕೃತ್ಯಗಳಿಗಾಗಿ ಶಿವ ನು ಕೊಂದಿರುತ್ತಾನೆ.ಆಡಿಯು ಅಂಧಕಾಸುರನ ಮಗ.ಆತನಿಗೆ ಶಿವನು ತನ್ನ ತಂದೆಯ ಸಾವಿಗೆ ಕಾರಣನಾದದ್ದು ತಿಳಿಯುತ್ತದೆ.ಅವನಿಗೆ ಶಿವ ನ ಮೇಲೆ ಸಿಟ್ಟು ಬರುತ್ತದೆ.ತನ್ನ ತಂದೆಯ ಸಾವಿಗೆ ಕಾರಣನಾದ ಶಿವನ ಮೇಲೆ ಸೇಡು ತೀರಿಸಿಕೊಳ್ಳಲು ಆತ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ.ಆಗ ಆತನ ತಪಸ್ಸಿಗೆ ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ.
ಬ್ರಹ್ಮ ಏನು ವರ ಬೇಕು ಎಂದು ಆಡಿಯನ್ನು ಕೇಳಿದಾಗ ಆತ ತನಗೆ ಸಾವು ಬರದಂತೆ ವರ ನೀಡಲು ಕೇಳಿಕೊಳ್ಳುತ್ತಾನೆ.ಆದರೆ ಬ್ರಹ್ಮ ಅದು ಸಾಧ್ಯವಿಲ್ಲವೆಂದೂ ಬೇರೆ ವರ ಕೇಳಲು ತಿಳಿಸುತ್ತಾನೆ.ಆಗ ಆಡಿಯು ತಾನು ವೇಷ ಬದಲಿಸಿಕೊಂಡಾಗ ಮಾತ್ರ ತನಗೆ ಸಾವು ಬರಬೇಕೆಂದು ಕೇಳುತ್ತಾನೆ.ಅದಕ್ಕೆ ಬ್ರಹ್ಮ ಸರಿ ಎನ್ನುತ್ತಾನೆ.
ತನ್ನ ವರಪ್ರಭಾವದಿಂದ ಕೊಬ್ಬಿದ ಆಡಿಯು ದೇವತೆಗಳ ಮೇಲೆ ಯುದ್ಧ ಸಾರುತ್ತಾನೆ.ಮತ್ತು ಲೋಕಕಂಟಕನಾಗಿ ಬದಲಾಗುತ್ತಾನೆ.ಆಗ ದೇವತೆಗಳು ಶಿವನ ಬಳಿ ದೂರು ನೀಡುತ್ತಾರೆ.ಆದರೆ ಆಡಿಯು ಪಾರ್ವತಿಯ ಸೌಂದರ್ಯಕ್ಕೆ ಮರುಳಾಗುತ್ತಾನೆ.ಒಮ್ಮೆ ಶಿವನು ಬೇರೆ ಕೆಲಸದ ಮೇಲೆ ಹೊರಗೆ ಹೋಗಿದ್ದಾಗ ಆಡಿಯು ಶಿವನಂತೆ ವೇಷ ಧರಿಸಿ ಪಾರ್ವತಿಯ ಬಳಿ ತೆರಳುತ್ತಾನೆ.
ಇದನ್ನರಿಯದ ಪಾರ್ವತಿ ಶಿವನೆಂದೇ ಭಾವಿಸಿ ಉಪಚರಿಸುತ್ತಾಳೆ.ಆಗ ಆಡಿಯು ಪಾರ್ವತಿಯನ್ನು ರೇಗಿಸಲು ಅವಳು ಕಪ್ಪು ಎಂದು ಮೂದಲಿಸುತ್ತಾನೆ.ಇದರಿಂದ ಪಾರ್ವತಿ ಬೇಸರಗೊಂಡು ಅಲ್ಲಿಂದ ತೆರಳಿ ತಪಸ್ಸಿಗೆ ಕೂಡುತ್ತಾಳೆ.ನಂತರ ಶಿವನು ವಾಪಸ್ ಬಂದಾಗ ಪಾರ್ವತಿ ಅಲ್ಲಿರದೆ ಆಡಿಯು ಪಾರ್ವತಿಯ ವೇಷ ಧರಿಸಿರುತ್ತಾನೆ.ಶಿವನು ಪಾರ್ವತಿಯೆಂದೇ ಭಾವಿಸುತ್ತಾನೆ.ಆದರೆ ಆಡಿಯ ವರ್ತನೆಯಿಂದ ಶಿವನಿಗೆ ಸಂಶಯ ಬರುತ್ತದೆ.
ಆಗ ಶಿವನಿಗೆ ಇದು ಪಾರ್ವತಿಯಲ್ಲವಂದೂ ಅವಳ ರೂಪದಲ್ಲಿ ಇರುವ ಆಡಿ ರಾಕ್ಷಸ ಎಂದೂ ತಿಳಿಯುತ್ತದೆ.ಮತ್ತು ಅವನಿಗೆ ಬ್ರಹ್ಮ ನೀಡಿದ ವರವೂ ಜ್ಞಾಪಕಕ್ಕೆ ಬರುತ್ತದೆ.ಈಗ ಆಡಿಯು ವೇಷ ಬದಲಿಸಿ ಇರುವ ಕಾರಣ ಶಿವನು ಆತನ ಸಂಹಾರ ಮಾಡುತ್ತಾನೆ.ಮತ್ತು ಲೋಕದಲ್ಲಿ ಶಾಂತಿ ನೆಲಸುವಂತೆ ಮಾಡುತ್ತಾನೆ.
 *****************ಕೃಪೆ: ಆಸೆ ಬ್ಲಾಗ್*****************

ಕಾಮೆಂಟ್‌ಗಳಿಲ್ಲ: